ನವೆಂಬರ್ ೧, ೨೦೨೩ ರಂದು ಮೈಸೂರಿನ ಬೋಗಾದಿಯಲ್ಲಿರುವ ಅಮೃತ ವಿದ್ಯಾಲಯಂ
ಶಾಲೆಯಲ್ಲಿ ೬೮ನೆಯ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಪ್ರಾಂಶುಪಾಲರು ಹಾಗೂ ಹಿರಿಯ ಶಿಕ್ಷಕರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಭುವನೇಶ್ವರಿ ದೇವಿಯ ಪಟಕ್ಕೆ ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡಿ, ನಾಡಗೀತೆಯ ಗಾಯನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನುಡಿ ಹಬ್ಬದ ಅಂಗವಾಗಿ ನೃತ್ಯ, ಸಂಗೀತ, ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಒಟ್ಟಾರೆ ಇಡೀ ದಿನದ ಕಾರ್ಯಕ್ರಮ ವೈಶಿಷ್ಟ್ಯ ಪೂರ್ಣವಾಗಿ ಮೂಡಿ ಬಂತು.